ಧನುಷ್&ತೇಜಸ್ ಕ್ರಿಯೇಷನ್ಸ್ಲಾಂಛನದಲ್ಲಿ ಹೊಸ ಬೂದನೂರು, ಎಸ್.ಚಂದ್ರಶೇಖರ್ ನಿರ್ಮಾಣದ ಬರ್ತ್ (ಡೋಂಟ್ ಮಿಸ್ಯೂಸ್) ಚಿತ್ರದ ಚಿತ್ರೀಕರಣ ಹಾಕಿಕೊಂಡ ಯೋಜನೆಯಂತೆ ಒಂದೇ ಹಂತದಲ್ಲಿ ಪೂರ್ಣಗೊಳಿಸಿದೆ. ಈ ಚಿತ್ರಕ್ಕೆ ಆರಂಭ ಹಾಗೂ ಮಧ್ಯಭಾಗದಲ್ಲಿ ಬರುವ ಸನ್ನಿವೇಶಕ್ಕೆ ತಕ್ಕಂತೆ ನಾಯಕನಟ ಶ್ರೀಮುರುಳಿಯು ಆಕಾಶ್ ಆಡಿಯೋವಿನಲ್ಲಿ ವಾಯ್ಸ್ ಓವರ್ ನೀಡಿದ್ದಾರೆ. ಚಿತ್ರದ ನಿರ್ದೇಶಕ - ಶಿವು ಹೊಳಲು, ಛಾಯಾಗ್ರಾಹಕ - ಕೆ.ಎಮ್. ವಿಷ್ಣುವರ್ಧನ್, ಸಂಗೀತ - ಜಿ.ಆರ್.ಶಂಕರ್, ಸಹ ನಿರ್ದೇಶಕ - ಶಿವ ಅರಶಿ, ಕಲೆ - ಸೀನು, ಸಾಹಸ-ಡಿಫರೆಂಟ್ ಡ್ಯಾನಿ, ನೃತ್ಯ - ರಾಮು-ಜಗನ್, ಸಂಕಲನ-ಕೆ.ಎಂ. ಪ್ರಕಾಶ್, ನಿರ್ವಹಣೆ- ನರಸಿಂಹ ಜಾಲಹಳ್ಳಿ - ರಾಮು, ತಾರಾಗಣದಲ್ಲಿ ಶ್ರೀಕಾಂತ್ (ಶ್ರೀಕಿ), ದುನಿಯಾ ರಶ್ಮಿ, ಕುಳ್ಳ ಮಧುಸೂದನ್, ಚಂದ್ರಶೇಖರ್, ಮುಂತಾದವರಿದ್ದಾರೆ.